ಪುತ್ತೂರು: ದೇಶಾದ್ಯಂತ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಪುತ್ತೂರಿನಲ್ಲಿ ಹೊಸ ಘಟನೆಯೊಂದು ಬೆಳಕಿಗೆ ಬಂದಿದೆ. ಪುತ್ತೂರಿನ ಪ್ರಸಿದ್ಧ ಮಹಾಲಿಂಗೇಶ್ವರ ದೇವಾಲಯದ ಕಾಣಿಕೆ ಹುಂಡಿ ತೆರೆಯುವ ಸಂದರ್ಭ ದೇವರಿಗೆ ಬರೆದ ಪತ್ರವೊಂದರ ಮೂಲಕ ಈ ಪ್ರಕರಣ ಬಯಲಾಗಿತ್ತು.
ದೇವರಿಗೆ ಬರೆದಿರುವ ಪತ್ರದಲ್ಲಿ, "ಸಮೀರ್ ಎನ್ನುವವನು ನನ್ನ ಜೀವನವನ್ನು ಹಾಳು ಮಾಡಿದ್ದಾನೆ. ಇವತ್ತು ನಾನು ಮತ್ತು ನನ್ನ ಮಗಳು ಬೀದಿಗೆ ಬಿದ್ದಿದ್ದೇವೆ . ಅವನಿಗೆ ಮದುವೆಯಾಗಲು ಹುಡುಗಿ ಸಿಕ್ಕಬಾರದು; ಅವನ ಜೀವನ ಕೂಡ ಹಾಳಾಗಬೇಕು" ಎಂಬ ಬಗೆಯ ಪ್ರಾರ್ಥನೆ ವ್ಯಕ್ತವಾಗಿದೆ.
ಈ ಪತ್ರದ ವಿಷಯ ತಿಳಿದು ಪುತ್ತೂರಿನ ಹಿಂದೂ ಸಮಾಜ, ದೇವರೇ ನ್ಯಾಯ ಒದಗಿಸಲಿ ಎಂದು ಮನವಿ ಮಾಡಿದೆ.