ಅಖಂಡ ಭಾರತದ ಸಂಕಲ್ಪಕ್ಕೆ ಶಕ್ತಿದಾಯಕ ಬೆಂಬಲ: ಹಿಂದು ಜಾಗರಣ ವೇದಿಕೆ ವಿಟ್ಲ ಘಟಕ, ಮಂಗಳೂರು ಗ್ರಾಮಾಂತರ ಜಿಲ್ಲೆ ಇದರ ವತಿಯಿಂದ 10/8/25 ರಂದು ಜಾಥಾ ಮತ್ತು ಜನಜಾಗೃತಿ ಸಭೆ

  • 27 Jul 2025 09:13:37 PM


ಕಲ್ಲಡ್ಕ : ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಘಟಕ, ಮಂಗಳೂರು ಗ್ರಾಮಾಂತರ ಜಿಲ್ಲೆ ಇದರ ವತಿಯಿಂದ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಆಗಸ್ಟ್ 10, 2025 ರಂದು ವಾಹನ ಜಾಥಾ ಹಾಗೂ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

 

ಮಧ್ಯಾಹ್ನ 2:30ಕ್ಕೆ ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಮೆಲ್ಕಾರು ರಾಮದೇವ ಸಭಾಭವನ ಮತ್ತು ವೀರಕೆಂಬ ಶಾರದಾ ಭಜನಾ ಮಂದಿರಗಳಿಂದ ಏಕಕಾಲಕ್ಕೆ ಜಾಥಾ ಆರಂಭವಾಗಲಿದೆ.

 

ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಸಂಜೆ 4 ಗಂಟೆಗೆ ಉಮಾಶಿವ ದೇವಸ್ಥಾನ, ಗೇರುಕಟ್ಟೆ, ಕಲ್ಲಡ್ಕದಲ್ಲಿ ನಡೆಸಲಾಗುವುದು.

 

ಈ ಜಾಥಾ ಹಾಗೂ ಸಭಾ ಕಾರ್ಯಕ್ರಮಕ್ಕೆ ಎಲ್ಲಾ ಹಿಂದೂ ಬಾಂಧವರಿಗೆ ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಘಟಕದ ಸಂಯೋಜಕರು, ಸಹಸಂಯೋಜಕರು ಮತ್ತು ಕಾರ್ಯಕಾರಿಣಿ ಸಮಿತಿಯವರು ಸ್ವಾಗತವನ್ನು ಕೋರಿದ್ದಾರೆ.