ದಕ್ಷಿಣ ಕನ್ನಡ: ಅಪ್ರಾಪ್ತ ವಯಸ್ಸಿನ ಬಾಲಕಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ದೇರಳಕಟ್ಟೆ ಸಮೀಪದ ರೆಂಜಾಡಿ ನಿವಾಸಿ ಮಹಮ್ಮದ್ ಶಹಬಾಝ್ (27) ಮತ್ತು ಆಕೆಯನ್ನು ಅಪಹರಿಸಲು ಸಹಕರಿಸಿದ ಕೊಣಾಜೆ ಮೂಲದ ಅಮೀರ್ ಸೊಹೈಲ್ ಹಾಗೂ ನಿಶಾ ದಂಪತಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯ ತಂದೆ ನೀಡಿದ ದೂರಿನ ಪ್ರಕಾರ ಶಹಬಾಝ್ ಈ ಹಿಂದೆಯೂ ಕೂಡ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದು ಈ ವಿಚಾರವಾಗಿ ಗದರಿಕೆ ಎದುರಿಸಿದ್ದ ಶಹಬಾಝ್, ನಿಶಾ-ಅಮೀರ್ ದಂಪತಿಗಳ ಸಹಾಯದಿಂದ ಮತ್ತೆ ಪುನಃ ಬಾಲಕಿಯನ್ನು ಮನೆತನಕ ತಲುಪದಂತೆ ಅಪಹರಿಸಿದ್ದ ಎಂದಾಗಿತ್ತು.
ಪೊಲೀಸರು ಬಾಲಕಿಯನ್ನು ಪತ್ತೆಹಚ್ಚಿ ಪೋಷಕರಿಗೆ ಹಸ್ತಾಂತರಿಸಿದ್ದು, ಆಕೆಯನ್ನು ಇದೀಗ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.