ಮೂಡಬಿದ್ರೆ: ಹಿಂದು ಜಾಗರಣ ವೇದಿಕೆಯ ಹೋರಾಟಕ್ಕೆ ಸಂದ ಜಯ! ಹಿಂದೂ ಜಾಗರಣ ವೇದಿಕೆಯ ಮುಖಂಡ ಸಮಿತ್ ರಾಜ್‌ಗೆ ನ್ಯಾಯಾಲಯದಿಂದ ಜಾಮೀನು ಮಂಜೂರು!

  • 28 Jun 2025 07:27:03 PM


ಮೂಡುಬಿದ್ರೆ: ಮೂಡುಬಿದ್ರೆ ಸಮೀಪ ಬಸ್ಸಿನ ವೇಗದ ಧಾವಂತದ ರಸ್ತೆ ಅಪಘಾತದಲ್ಲಿ ಸಂತ್ರಸ್ತರ ಪರವಾಗಿ ನಿಂತು ನ್ಯಾಯ ದೊರಕಿಸಿ ಕೊಟ್ಟ ಕಾರಣಕ್ಕೆ 6 ತಿಂಗಳ ಹಳೆಯ ಪ್ರಕರಣಕ್ಕೆ ರಾಜಕೀಯ ಪ್ರೇರಣೆಯಿಂದ ಬಂಧನಕ್ಕೆ ಒಳಾಗಾಗಿದ್ದ ಹಿಂ.ಜಾ.ವೇ.ಮುಖಂಡ ಸಮಿತ್ ರಾಜ್ ಅವರಿಗೆ ಮೂಡ್‌ಬಿದ್ರೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 

 

ಕಳೆದ ಕೆಲವು ದಿನಗಳ ಹಿಂದೆ ಅರೆಸ್ಟ್ ಮಾಡಲಾಗಿದ್ದ ಸಮಿತ್ ರಾಜ್ ಬಂಧನದ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ ಎಂದು ಹಿಂದು ಜಾಗರಣ ವೇದಿಕೆ ಆರೋಪಿಸಿತ್ತು.

ಸಂಘಟನೆಯ ಶಾಂತಿಯುತ ಹೋರಾಟಕ್ಕೆ ಇಂದು ನ್ಯಾಯಾಲಯದ ಈ ತೀರ್ಪು ಮಹತ್ವದ ಬಲ ನೀಡಿದೆ. 

ಹಿಂದು ಜಾಗರಣ ವೇದಿಕೆ ಈ ತೀರ್ಪನ್ನು "ನ್ಯಾಯದ ಜಯ" ಎಂದು ಶ್ಲಾಘಿಸಿದೆ.