ದೆಹಲಿ: ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಧ್ವನಿಯಲ್ಲಿರುವ ಸೈಬರ್ ಅಪರಾಧ ಜಾಗೃತಿ ಕಾಲರ್ ಟ್ಯೂನ್ನ್ನು ಇಂದಿನಿಂದ ಗುರುವಾರದಿಂದ ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಲು ಈ ಕಾಲರ್ ಟ್ಯೂನ್ನ್ನು ದೇಶವ್ಯಾಪಿಯಾಗಿ ಸುಮಾರು ತಿಂಗಳುಗಳಿಂದ ಬಳಕೆ ಮಾಡಲಾಗುತ್ತಿತ್ತು.
ಈ ಮೊದಲು ಕಾಲ್ ಮಾಡುವಾಗ ಪ್ರಸಾರವಾಗುವ ಈ ಪ್ರಿ ರೆಕಾರ್ಡ್ ತುರ್ತು ಸಂದರ್ಭದಲ್ಲಿ ಅಡಚಣೆ ಉಂಟುಮಾಡುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ .
ಇತ್ತೀಚೆಗೆ, ಬಚ್ಚನ್ ಅವರ ಧ್ವನಿ ಮತ್ತು ಹಾಡು ಟ್ರೋಲ್ಗೆ ಗುರಿಯಾಗಿದ್ದು, ಇದಕ್ಕೆ ಅಮಿತಾಬ್ ಬಚ್ಚನ್ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದರು. ಇದಕ್ಕೂ ಮುನ್ನ ಕೊರೊನಾ ವೈರಸ್ ಜಾಗೃತಿ ಕಾಲರ್ ಟ್ಯೂನ್ಗೆ ಸಂಬಂಧಿಸಿದಂತೆ ಅವರ ಧ್ವನಿಯ ಬಳಕೆಗೆ ವಿರೋಧ ವ್ಯಕ್ತವಾಗಿತ್ತು.
ಬಚ್ಚನ್ ಕುಟುಂಬದ ಕೆಲ ಸದಸ್ಯರು ಸೋಂಕಿಗೆ ಒಳಗಾದ ನಂತರ, ಅವರ ಧ್ವನಿ ಕಾಲರ್ ಟ್ಯೂನ್ನಿಂದ ತೆಗೆದುಹಾಕಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿತ್ತು.
ಕೇಂದ್ರ ಸರ್ಕಾರ ಇದೀಗ ಸಾರ್ವಜನಿಕ ಅಭಿಪ್ರಾಯ ಹಾಗೂ ತುರ್ತು ಸೇವೆಯ ಪ್ರಾಮುಖ್ಯತೆ ಗಮನದಲ್ಲಿಟ್ಟುಕೊಂಡು ಕಾಲರ್ ಟ್ಯೂನ್ ತೆಗೆದುಹಾಕಲು ನಿರ್ಧಾರ ಮಾಡಿರುತ್ತದೆ ಇಂದಿನಿಂದ pre-record ಕಾಲರ್ ಟ್ಯೂನ್ ಇರುವುದಿಲ್ಲ .
ಮುಂದಿನ ದಿನಗಳಲ್ಲಿ ಹೊಸ ಜಾಗೃತಿ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.