ಉಳ್ಳಾಲ: ಸೇವೆಯೆಂಬ ಯಜ್ಞದಲ್ಲಿ ಸಮೀದೇಯಂತೆ ಉರಿಯುವದು ಎಂಬ ತಾತ್ವಿಕ ದೃಷ್ಠಿಕೋನವನ್ನು ಮುನ್ನಡೆಸಿಕೊಂಡು, ಉಳ್ಳಾಲದ ಟೀಮ್ ಕಲ್ಕಿ ಸೇವಾ ಯೋಜನೆಯು ತನ್ನ 19ನೇ ಹಂತದ ಸೇವಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.
ಈ ಹಂತದಲ್ಲಿ ಸಂಗ್ರಹವಾದ ₹10,000 ಮೊತ್ತವನ್ನು ಕಾಸರಗೋಡು ಜಿಲ್ಲೆಯ ಶೇಷಾವನದ ನಿವಾಸಿ ರಾಜ್ ಎಂಬ ವ್ಯಕ್ತಿಯ ಕ್ಯಾನ್ಸರ್ ಚಿಕಿತ್ಸೆಗಾಗಿ ನೇರವಾಗಿ ಹಸ್ತಾಂತರಿಸಿದ್ದಾರೆ.
ಗುರುಹಿರಿಯರ ಮಾರ್ಗದರ್ಶನದಲ್ಲಿ ಹತ್ತಿರದವರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಟೀಮ್ ಕಲ್ಕಿ, ಈ ಪರ್ಯಾಯ ಹಂತವನ್ನು ಸಹ ನಿಜವಾದ ಸೇವಾ ಭಾವನೆಯೊಂದಿಗೆ ನೆರವೇರಿಸಿದೆ.
ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ಸದಸ್ಯರಿಗೆ ಟೀಮ್ ಅಧ್ಯಕ್ಷರು ಹಾಗೂ ಎಲ್ಲಾ ಸರ್ವ ಸದಸ್ಯರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದು, ಮುಂದೆ ಇನ್ನಷ್ಟು ಕುಟುಂಬಗಳಿಗೆ ಸ್ಪಂದಿಸುವ ಸಂಕಲ್ಪವನ್ನು ಪುನರ್ ದೃಢಪಡಿಸಿದ್ದಾರೆ.