ವಿಟ್ಲ : ಕನ್ಯಾನ ಗ್ರಾಮದ ಮಂಡ್ಯೂರು ಎಂಬಲ್ಲಿ ಭಾನುವಾರದ ಸಂಜೆ ಒಂದು ಕ್ಷಣ ಭೂಮಿ ಕಂಪಿಸಿದ ಅನುಭವವಾಗಿದ್ದು ಅಲ್ಲಿನ ಹತ್ತಿರದ ನಿವಾಸಿಗಳಭಯ ಭೀತಿಯಲ್ಲಿದ್ದಾರೆ.
ಕಂಪನ 1-2 ಸೆಕೆಂಡುಗಳವರೆಗೆ ಅನುಭವವಾಗಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಈ ಘಟನೆಗೆ ಸಂಬಂಧಿಸಿದ ವಿಡಿಯೋ ಹಂಚಿಕೊಂಡಿದ್ದು, ಗ್ರಾಪಂ ಅಧಿಕಾರಿಗಳು ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ವಿಟ್ಲದಲ್ಲಿ ನಡೆದ ಇದೇ ರೀತಿಯ ಘಟನೆಯ ಹಿಂದಿನ ಕಾರಣ ಸ್ಥಳೀಯ ಕಲ್ಲಿನ ಕೋರೆಯ ಸ್ಫೋಟವಾಗಿತ್ತು ಎಂಬುದು ಸಾಬೀತು ಆಗಿತ್ತು ಆದರೂ ಈಗ ಅದೇ ಕಾರಣವಾಗಿರಬಹುದೆಂಬ ಶಂಕೆ ಮೂಡುತ್ತಿದೆ.
ಸ್ಥಳೀಯರು ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.