ವಿಟ್ಲ: ಭಾರಿ ಮಳೆಗೆ ಕಾಲುದಾರಿ ಕುಸಿತ; ಜನಜೀವನ ಅಸ್ತವ್ಯಸ್ತ

  • 15 Jun 2025 05:26:47 PM


ವಿಟ್ಲ: ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಳಿತ್ತನೂಜಿ ವಾರ್ಡಿನ ಕಲ್ಲಮರೆಯಿ ಪ್ರದೇಶದಲ್ಲಿ ತೀವ್ರ ಮಳೆಯಿಂದಾಗಿ ಪ್ರಮುಖ ಕಾಲುದಾರಿ ಸಂಪೂರ್ಣವಾಗಿ ಜರಿದು ಹೋಗಿದೆ. 

 

ಈ ಮೂಲಕ ತಾಳಿತ್ತನೂಜಿ ನಿವಾಸಿಗಳು ಬಳಸುತ್ತಿದ್ದ ಏಕೈಕ ಸಂಪರ್ಕ ಮಾರ್ಗ ಮುಚ್ಚಲ್ಪಟ್ಟಿದ್ದು, ಸಾರ್ವಜನಿಕರು ದೈನಂದಿನ ಓಡಾಟಕ್ಕೆ ಪರದಾಡುವಂತ ಅವಸ್ಥೆ ಉಂಟಾಗಿದೆ.

 

ಮಳೆಯ ಬಿರುಸಿನಿಂದಾಗಿ ಕಾಲುದಾರಿ ಸಂಪೂರ್ಣವಾಗಿ ಜರಿದು ಹೋಗಿ ಇದರ ಪರಿಣಾಮವಾಗಿ ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವ ಕಾರ್ಮಿಕರು, ಸಮಸ್ಯೆ ಎದುರಿಸುತ್ತಿದ್ದಾರೆ. 

 

ಈ ಘಟನೆ ಸಂಬಂಧಿಕವಾಗಿ ಸ್ಥಳಕ್ಕೆ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕೆ.ಎ. ಅಸ್ಮ ಹಸೈನಾರ್, ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿ ಲಾವಣ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾತನಾಡಿ, ಶೀಘ್ರ ದುರಸ್ತಿ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.