ಪುತ್ತೂರು: ರಸ್ತೆ ಮಧ್ಯೆ ಕಣಿ ಉಂಟಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದ ಸಂದರ್ಭದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರು ತಾವೇ ಹಾರೆ ಹಿಡಿದು ರಿಪೇರಿ ಕಾರ್ಯಕ್ಕೆ ಇಳಿದ ಘಟನೆ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೆಲವರು ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಹಲವರು ಇದನ್ನು ನಾಟಕೀಯ ಪ್ರಚಾರದ ಭಾಗ ಎಂದು ಆರೋಪಿಸುತ್ತಿದ್ದಾರೆ.
ಈ ಪ್ರಕ್ರಿಯೆಗೆ ಮಿಶ್ರ ಅಭಿಪ್ರಾಯಗಳು ಬಂದಿದ್ದು ಹಲವರು ಜನಸಾಮಾನ್ಯರ ಸಮಸ್ಯೆಗಳಿಗೆ ಶಾಸಕರ ನೇರ ಸ್ಪಂದನೆಗೆ ಇದುವೇ ಒಂದು ಸಾಕ್ಷಿ ಎಂದು ಇಂತಹ ಶಾಸಕರು ದೊರೆಕಿರುವುದು ನಮ್ಮ ಭಾಗ್ಯ ಎಂದು ಶ್ಲಾಘಿಸಿದರೆ ಇನ್ನೂ ಕೆಲವರು ಇಷ್ಟು ದಿನ ಇವರು ಎಲ್ಲಿ ಹೋದ್ರು? ಚುನಾವಣೆ ಸಮೀಪ ಬಂದಾಗ ಮಾತ್ರ ಹಾರೆ ಹಿಡಿದು ಫೋಟೋಗೆ ಪೋಸ್ ಕೊಡುವುದೇ ಸದ್ಯದ ಟ್ರೆಂಡ್ ಆಗಿ ಬಿಟ್ಟಿದೆ ನಮಗೆ ಇದಕ್ಕೆ ಶಾಶ್ವತ ಪರಿಹಾರ ಬೇಕೆಂದೂ ಈ ಕೆಲಸವನ್ನ ಅವರು ಎಂಎಲ್ಎ ಆದ ಸಮಯದಲ್ಲೇ ಮಾಡಿಸಿರುತ್ತಿದ್ದಾರೆ ಈಗ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬುದಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಇನ್ನೂ ಕೆಲವು ಇವರೆಲ್ಲಾ ಚುನಾವಣೆ ಸಮಯ ಬಂದಾಗ ಮಾತ್ರ ಜನರ ಹಿತಚಿಂತಕರು ಆಗ್ತಾರಾ? ಎಂಬುದಾಗಿ ಪ್ರಶ್ನಿಸಿದ್ದಾರೆ.