ಅಹಮದಾಬಾದ್‌: ಇಡೀ ವಿಮಾನವೇ ಸುಟ್ಟು ಬೂದಿಯಾದರೂ ಭಗವದ್ಗೀತೆ ಗ್ರಂಥ ಅಕ್ಷತವಾಗಿ ಉಳಿದ ಅಚ್ಚರಿ ದೃಶ್ಯ!

  • 14 Jun 2025 03:07:16 PM


ಅಹಮದಾಬಾದ್‌: ಗುರುವಾರ ಗುಜರಾತಿನ ಅಹಮದಾಬಾದ್‌ ನಲ್ಲಿ ಸಂಭವಿಸಿದ ಭೀಕರ ಏರ್ ಇಂಡಿಯಾ ವಿಮಾನ ದುರಂತವು ದೇಶದ ವಿಮಾನಯಾನ ಇತಿಹಾಸದಲ್ಲೇ ನಡೆದ ಅತ್ಯಂತ ಭೀಕರ ಘಟನೆಯಾಗಿದೆ. 

 

ಸುಮಾರು 242 ಪ್ರಯಾಣಿಕರನ್ನು ಹೊತ್ತಿದ್ದ ವಿಮಾನ ಭಾರೀ ವೇಗದಲ್ಲಿ ಪತನಗೊಂಡ ಪರಿಣಾಮ, ಸ್ಫೋಟದೊಂದಿಗೆ ಎಲ್ಲವೂ ಸುಟ್ಟು ಭಸ್ಮವಾಗಿದೆ.

 

ಈ ಭೀಕರ ಅಪಘಾತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ಪವಾಡ ದಂತೆ ಒಬ್ಬ ಪ್ರಯಾಣಿಕ ಬಿಟ್ಟು ಇನ್ನುಳಿದವರೆಲ್ಲ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. 

 

ವಿಮಾನ ದುರಂತದ ಘೋರ ದೃಶ್ಯಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿದ್ದು, ಇಡೀ ದೇಶವನ್ನು ನಡುಗಿಸಿವೆ.

 

ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸುವ ವೇಳೆಯಲ್ಲಿ ವಿಮಾನದ ಅವಶೇಷಗಳ ಅಡಿಯಲ್ಲಿ ಒಂದು ಭಗವದ್ಗೀತೆಯ ಪುಸ್ತಕ ಪತ್ತೆಯಾಗಿದೆ. 

 

ವಿಶೇಷವೆಂದರೆ ಇಡೀ ವಿಮಾನ ಸುಟ್ಟು ಸುಟ್ಟು ಭಸ್ಮ ಆದರೂ ಕೂಡಈ ಪವಿತ್ರ ಗ್ರಂಥ ಮಾತ್ರ ಏನೂ ಆಗದೇ ಉಳಿದಿದ್ದು, ಸ್ಥಳೀಯರ ಹಾಗೂ ರಕ್ಷಣಾ ಸಿಬ್ಬಂದಿಯ ಆಶ್ಚರ್ಯದ ವಿಷಯವಾಯಿತು.

 

ಈ ಘಟನೆಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಭೀರವಾಗಿ ಗಮನಹರಿಸಿದ್ದು, ಅಪಘಾತದ ಕಾರಣ ಪರಿಶೀಲಿಸಲು ವಿಶೇಷ ತನಿಖಾ ಸಮಿತಿಯನ್ನು ರಚಿಸಿರುತ್ತದೆ.

 

ಮೃತರ ಕುಟುಂಬಗಳಿಗೆ ಸರ್ಕಾರ ಸಂತಾಪ ಸೂಚಿಸಿ ಪರಿಹಾರವನ್ನೂ ಘೋಷಿಸಿದೆ.