ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತ: ಟೇಕಾಫ್‌ನ ಕೆಲ ಸೆಕೆಂಡ್‌ಗಳಲ್ಲಿ ದುರಂತ ; ನನ್ನ ಕಣ್ಣ ಮುಂದೆ ಎಲ್ಲವೂ ನಡೆದಿತ್ತು: ಪಾರಾದ ಬ್ರಿಟಿಷ್ ಪ್ರಜೆ ಬಿಚ್ಚಿಟ್ಟ ಕಹಿ ಅನುಭವ!

  • 13 Jun 2025 03:46:30 PM


ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಪವಾಡ ಸದೃಶವಾಗಿ ಪಾರಾದ 40 ವರ್ಷದ ಬ್ರಿಟಿಷ್ ಪ್ರಜೆ ರಮೇಶ್ ವಿಶ್ವಾಸ್ ಕುಮಾರ್ ಅವರು, ಆತಂಕಭರಿತವಾದ ಕ್ಷಣಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

 

ಅಹಮದಾಬಾದ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ವಿಮಾನ ಅಪಘಾತದ ಕ್ಷಣದಲ್ಲಿ ತಾನೇ ಸೀಟ್ ಬೆಲ್ಟ್ ತೆಗೆದು ಎಮರ್ಜೆನ್ಸಿ ಬಾಲಿಗಿಲಿನಿಂದ ಜಿಗಿದು ಕೊಂಡೆ ತಿಳಿಸಿದ್ದಾರೆ. 

 

ನನ್ನ ಕಣ್ಣ ಮುಂದೆ ಎಲ್ಲವೂ ನಡೆಯಿತು. ನಾನು ಬದುಕುಳಿದಿದ್ದೇ ದೊಡ್ಡ ಪವಾಡ. ನನಗೆ ಇದು ನಂಬಲಾಗಲಿಲ್ಲ. ಕೆಲ ಕ್ಷಣ ನನಗೆ ನಾನು ಸತ್ತೇ ಹೋಗಿದ್ದೆನೋ ಅನ್ನಿಸಿತ್ತು. ಆದರೆ ಕಣ್ಣು ತೆರೆಯುತ್ತಿದ್ದಂತೆಯೇ ಬದುಕಿದ್ದೇನೆ ಎಂಬುದು ತಿಳಿಯಿತು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

 

ಅವರು ನೀಡಿರುವ ಮಾಹಿತಿ ಪ್ರಕಾರ, ವಿಮಾನ ಟೇಕಾಫ್ ಆಗುತ್ತಿದ್ದಂತೆಯೇ ಏನೋ ತೊಂದರೆ ಆಗುತ್ತಿದೆಯೆಂಬ ಅನುಮಾನ ಬಂತು. ಸುಮಾರು 5ರಿಂದ 10 ಸೆಕೆಂಡುಗಳಲ್ಲಿ ವಿಮಾನ ಸ್ಟ್ರಕ್ ಆದ ಅನುಭವ ಉಂಟಾಯಿತು. ಆಗ ವಿಮಾನದ ಒಳಗೆ ಹಸಿರು ಮತ್ತು ಬಿಳಿ ಬಣ್ಣದ ಲೈಟುಗಳು ಆನ್ ಆಗುತಿತ್ತು.

 

 ಕೆಲವೇ ಕ್ಷಣಗಳಲ್ಲಿ ವಿಮಾನ ಕಟ್ಟಡಕ್ಕೆ ಡಿಕ್ಕಿ ಹೊಡೆದಿತು. ನಂತರ ಅದು ಕಟ್ಟಡದ ಮೇಲಿಂದ ಕೆಳಗೆ ಇಳಿಯಿತು. ನಾನು ಹೇಗೆ ಬದುಕಿ ಉಳಿದೆ ಅನ್ನುವುದೇ ಗೊತ್ತಿಲ್ಲ ಎಂದು ಹೇಳಿದರು.

 

ಘಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ‘ಘಟನೆ ಹೇಗೆ ಆಯಿತು?’ ಎಂದು ಕೇಳಿದರು. ನಾನು ಸಂಪೂರ್ಣ ವಿವರ ನೀಡಿದ್ದೇನೆ ಎಂದು ತಿಳಿಸಿದ್ದಾರೆ.