ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ಲಾಕಪ್ನಿಂದ ತಪ್ಪಿಸಿಕೊಂಡಿದ್ದ ವಾರಂಟ್ ಆರೋಪಿ ಸಿದ್ದೀಕ್ ಸಾರಿಕ್ ಫರ್ಹಾನ್ (29) ಎಂಬಾತನನ್ನು ಪೊಲೀಸರು ಮತ್ತೊಮ್ಮೆ ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ ಮುಂಜಾನೆ ಕುಡಿಯಲು ನೀರು ಕೇಳಿದ ವೇಳೆ ಲಾಕಪ್ನಿಂದ ಪರಾರಿ ಆಗಿದ್ದ ಫರ್ಹಾನ್ ಮುಂಬೈಗೆ ಓಡಿದ್ದಾನೆ ಎಂಬ ಸುದ್ದಿ ಹರಡಿದ್ದು, ಪೊಲೀಸರು ಆತ ಸ್ಥಳೀಯವಾಗಿ ಅಡಗಿರುವ ಶಂಕೆ ಮೇರೆಗೆ ತನಿಖೆ ಆರಂಭಿಸಿದ್ದರು.
ಮಂಜೇಶ್ವರದ ಸಮೀಪವಲ್ಲಿಯೇ ಅಡಗಿದ್ದ ಎನ್ನಲಾದ ನಿಖರವಾದ ಮಾಹಿತಿಯ ಆಧಾರದಲ್ಲಿ ಫರ್ಹಾನ್ನನ್ನು ಪೊಲೀಸರು ಗುರುತಿಸಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
2019 ರ ಮೇ 25ರಂದು ನಡೆದ ಘಟನೆಯಲ್ಲಿ ಸಿದ್ದೀಕ್ ಪೋಲಿಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಹಾಗೂ ಕಲ್ಲು ತೂರಾಟ ನಡೆಸಿದ್ದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯ ದಿನ ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಗೆಲುವಿನ ಸಂದರ್ಭಗಳಲ್ಲಿ ನಡೆದ ಗಲಭೆಯ ನಡುವೆ ಈತನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿತ್ತು. ನ್ಯಾಯಾಲಯದ ವಾರಂಟ್ ಜಾರಿಯಲ್ಲಿದ್ದಾಗ ಈತವನ್ನು ಬಂಧಿಸಲಾಗಿತ್ತು.