ನ್ಯಾಯವಾದಿ ಅಕ್ಷಯ್ ನಾಗೋಜಿ ಯವರ ನೂತನ ಕಛೇರಿ ಜ್ಯೇಷ್ಠ ಲಾ ಚೇಂಬರ್ ಕಡಬದಲ್ಲಿ ಉಧ್ಘಾಟನೆ

  • 09 Jun 2025 04:32:32 PM


ನ್ಯಾಯವಾದಿ ಅಕ್ಷಯ್ ನಾಗೋಜಿ ಯವರ ನೂತನ ಕಛೇರಿಯಾದ ಜ್ಯೇಷ್ಠ ಲಾ ಚೇಂಬರ್ ನ ಉಧ್ಘಾಟನೆ.

 

          ದಕ್ಷಿಣ ಕನ್ನಡ ಜಿಲ್ಲಾ ಕಡಬ ತಾಲೂಕಿನ ಪಂಜ ರಸ್ತೆ, ಯೋಗಕ್ಷೇಮ ಸಂಕೀರ್ಣ  ಪ್ರಥಮ ಮಹಡಿ , (ಕೃಷಿ ಪತ್ತಿನ ಸಹಕಾರಿ ಸಂಘ ಬ್ಯಾಂಕಿನ ಹತ್ತಿರ) ಇಲ್ಲಿ ನ್ಯಾಯವಾದಿ ಅಕ್ಷಯ್ ನಾಗೋಜಿ ಯವರ ನೂತನ ಕಛೇರಿಯಾದ ಜ್ಯೇಷ್ಠ ಲಾ ಚೇಂಬರ್ ನ್ನು ಜೂನ್ 9 ಸೋಮವಾರದಂದು ನಿವೃತ್ತ ಶಿಕ್ಷಕರಾದ ಶ್ರೀ ಪೆರ್ಗಡೆ ಗೌಡ ದೇರಾಜೆ ಅವರು ಉದ್ಘಾಟಿಸಿದರು.

 

ಈ ಕಾರ್ಯಕ್ರಮದಲ್ಲಿ ಮುಖ್ಯ  ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ  ಪಿ.ಪಿ ವರ್ಗೀಸ್, ಮಾಜಿ ಜಿಲ್ಲಾ ಪರಿಷತ್ ಸದಸ್ಯರಾದ ಸಹ್ಯದ್ ಮೀರಾ ಸಾಹೇಬ್, ಕಡಬ ಸಿ.ಎ ಬ್ಯಾಂಕಿನ ಅಧ್ಯಕ್ಷರಾದ ರಮೇಶ್ ಕಲ್ಪುರೆ, ಉಪಾಧ್ಯಕ್ಷರಾದ ಗಿರೀಶ್, ಕಡಬ ದ ಉದ್ಯಮಿಗಳಾದ ಕಿಶನ್ ರೈ, ದಯಾನಂದ ಅರಿಗ ಹಾಗೂ ಎನ್ ವಿಠಲ ಗೌಡ ನಾಗೋಜಿ ದೀಪ ಬೆಳಗಿಸುವುದರ ಮೂಲಕ ನೂತನ ಕಛೇರಿಯನ್ನು ಚಾಲನೆ ಮಾಡಲಾಯಿತು.


        ಈ ಸಂದರ್ಭದಲ್ಲಿ ಕಡಬ ಸಿ ಎ ಬ್ಯಾಂಕಿನ ನಿರ್ದೇಶಕರು,ಸಿ ಎ ಬ್ಯಾಂಕಿನ ಸಿಬ್ಬಂದಿ ವರ್ಗ, ಪ್ರಮುಖರಾದ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗಣೇಶ್ ಕೈಕುರೆ, ಡಾ. ಅನಿಲ್ ಈಶೋ, ಪ್ರಮೋದ್ ರೈ, ಶ್ರೀಮತಿ ಚಾರ್ವಿ ನಾಗೋಜಿ, ನವೀನ್ ದೇರಾಜೆ ಗಿರೀಶ್ ಎಡಮಂಗಲ, ಶ್ರೀಮತಿ ಮಾನಸ, ವಕೀಲರಾದ ಪ್ರಶಾಂತ್ ಪಂಜೋಡಿ, ಸುಂದರ ಗೌಡ, ಶಿವಪ್ರಸಾದ್ ಪುತ್ತಿಲ ಹಾಗೂ  ಊರಿನ ಹಲವಾರು ಗಣ್ಯರು  ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಪೆರ್ಗಡೆ ಗೌಡ ದೇರಾಜೆ, ರಮೇಶ್ ಕಲ್ಪುರೆ, ತೋಮಸ್ ಇಡಯಾಲ್, ಸದಾನಂದ ಗೌಡ ಇವರನ್ನು ಸನ್ಮಾನಿಸಲಾಯಿತು.


               ನ್ಯಾಯವಾದಿ ಅಕ್ಷಯ್ ನಾಗೋಜಿ ಸ್ವಾಗತಿಸಿ, ರಕ್ಷಿತಾ ಎ.ಜಿ ರವರು ವಂದಿಸಿದರು, ನ್ಯಾಯವಾದಿ ಶ್ರೀಮತಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.