ಬಾಗಲಕೋಟೆ: ಮಗುವಿಗೆ ದೆವ್ವ ಹಿಡಿದಿದೆ ಎಂದು ಹೆದರಿಸಿ ₹28 ಲಕ್ಷ ವಂಚಿಸಿದ ಜ್ಯೋತಿಷಿ ! ಪೂರ್ತಿ ಸ್ಟೋರಿ ಇಲ್ಲಿದೆ ನೋಡಿ!

  • 18 Jun 2025 03:35:05 PM


ತೇರದಾಳ ,ಬಾಗಲಕೋಟೆ: ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಲಕ್ಷ್ಮಿ ಲಾಗಲೋಟಿ ಎಂಬ ಮಹಿಳೆಗೆ ಜ್ಯೋತಿಷಿ ಸೀಮಾ ಶಾಂಭವಿ ಶೆಟ್ಟಿ ಎಂಬವರಿಂದ 28ಲಕ್ಷ ರೂ ವಂಚನೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. 

 

ನಿಮ್ಮ ತಾಯಿ ಆತ್ಮ ಮಗು ಮೇಲೆ ದೆವ್ವವಾಗಿ ಬಂದಿದೆ ಎಂಬ ನಂಬಿಕೆಯ ಮೇರೆಗೆ ಮಹಿಳೆಯೊಬ್ಬರು ತಮ್ಮ ಆರ್ಥಿಕ ಬದುಕನ್ನೇ ಕಳೆದುಕೊಂಡಿದ್ದಾರೆ.

 

ಲಕ್ಷ್ಮಿ ಅವರ ಎರಡು ವರ್ಷದ ಮಗನಿಗೆ ನಿರಂತರ ಜ್ವರ ಬರುತ್ತಿದ್ದು ಅದರ ಪರಿಹಾರಕ್ಕೆ ಎಂದು ಅವರು ಜ್ಯೋತಿಷಿ ಮೊರೆಹೋದರು. 

 

ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಸೀಮಾಶಾಂಭವಿ ಶೆಟ್ಟಿ ಎಂಬ ಜ್ಯೋತಿಷಿಯನ್ನು ಸ್ನೇಹಿತೆ ಒಬ್ಬರು ಪರಿಚಯ ಮಾಡಿಸಿದರು.

 

ಬಳಿಕ ಸೀಮಾಶಾಂಭವಿ ಫೋನ್ ಮೂಲಕ ಸಂಪರ್ಕಿಸಿ, “ನಿಮ್ಮ ಮಗುವಿಗೆ ನಿಮ್ಮ ತಾಯಿಯ ಆತ್ಮವಿದೆ, ಇದನ್ನು ಹೊರಡಿಸಲು ಹೋಮ ಹವನ ಮಾಡಬೇಕಾಗುತ್ತದೆ” ಎಂದು ಹೇಳಿ ಭಯ ಹುಟ್ಟಿಸಿದರು.

 

 ಈ ನಂಬಿಕೆಯಲ್ಲಿ ಲಕ್ಷ್ಮಿ ಅವರು ಹಂತ ಹಂತವಾಗಿ ₹28 ಲಕ್ಷ ಹಣ ಪೇಟಿಎಂ, ಫೋನ್ ಪೇ ಮತ್ತು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದರು.

 

ಲಕ್ಷ್ಮಿ ಅವರು ತಮ್ಮ ಚಿನ್ನಾಭರಣ ಹಾಗೂ ತಾಯಿಯ ಠೇವಣಿ ಹಣವನ್ನು ಮಾರಿಹಾಕಿ ಹಣ ಹೊಂದಿಸಿ ಇದನ್ನೆಲ್ಲಾ ಮಾಡಿಸಿದ್ದರು. ಇದನ್ನೆಲ್ಲ ಸೀಮಾಶಾಂಭವಿ ನಕಲಿ ಪೂಜಾ ವಿಡಿಯೋ ಕಳುಹಿಸುತ್ತಾ ವಿಶ್ವಾಸ ಗಳಿಸಿ ಹಣ ಲಪಟಾಯಿಸಿದ್ದಾಳೆ ಎನ್ನಲಾಗಿದೆ.

 

ಈ ಸಂಬಂಧ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ತನಿಖೆ ಮುಂದುವರೆದಿದ್ದು, ಸೀಮಾಶಾಂಭವಿಯ ಮೇಲೆ ಮೇಲಿಂದ ಮೇಲೆ ಪ್ರಕರಣಗಳು ವರದಿಯಾಗುತ್ತಿವೆ ಎನ್ನಲಾಗಿದೆ.