ಕೊಳ್ತಿಗೆ : ಗ್ರಾಮ ಪಂಚಾಯತ್‌ ಎದುರು ಬಿಜೆಪಿ ಪ್ರತಿಭಟನೆ: ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಗಂಭೀರ ಆಕ್ರೋಶ!

  • 24 Jun 2025 04:08:24 PM


ಕೊಳ್ತಿಗೆ: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ವತಿಯಿಂದ ಕೊಳ್ತಿಗೆ ಗ್ರಾಮ ಪಂಚಾಯತ್‌ ಮುಂಭಾಗದಲ್ಲಿ ಶಾ ಪ್ರತಿಭಟನೆ ನಡೆಯಿತು. 

 

ಈ ಸಂದರ್ಭದಲ್ಲಿ ವಿವಿಧ ನಾಯಕರು ಭಾಗವಹಿಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

 

 

ಈ ಪ್ರತಿಭಟನೆಯಲ್ಲಿ ಅರುಣ್ ಕುಮಾರ್ ಪುತ್ತಿಲರು ಪ್ರಮುಖ ಭಾಷಣ ನಡೆಸಿದರು. 

 

 

ಈ ಸಂಧರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸತ್ಯಪ್ರಕಾಶ್ ಕುಂಟಿಕಾನ, ಕೊಳ್ತಿಗೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ತೀರ್ಥನಂದ ಗೌಡ ದುಗ್ಗಳ, ಶಕ್ತಿ ಕೇಂದ್ರದ ಕಾರ್ಯದರ್ಶಿ ಸತೀಶ್ ಪಾಂಬಾರು, ತಾಲೂಕು ಉಪಾಧ್ಯಕ್ಷ ಯತಿಂದ್ರ ಕೊಚ್ಚಿ, ಶಿವರಾಮ್ ಭಟ್ ಭೀರ್ನಕಜೆ, ಗಣೇಶ್ ಭಟ್ ಮಫಳಮಜಲು, ಉದ್ಯಮಿ ಭೀಮಯ್ಯ ಭಟ್ ಮತ್ತು ವಿವಿಧ ಸಹಕಾರಿ ಸಂಘಗಳ ನಿರ್ದೇಶಕರುಗಳು, ಪಂಚಾಯತ್ ಸದಸ್ಯರು, ಹಿರಿಯರು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

 

 

ಗ್ರಾಮ ಮಟ್ಟದಲ್ಲಿ ಕಳಪೆ ಆಡಳಿತ, ಯೋಜನೆಗಳ ಅಸಮರ್ಪಕ ಅನುಷ್ಠಾನ, ಬೆಲೆ ಏರಿಕೆ, ಸಮಾಜ ಕಲ್ಯಾಣ ಯೋಜನೆಗಳಲ್ಲಿನ ಅಕ್ರಮ ಮತ್ತು ದ್ವೇಷದ ರಾಜಕೀಯ ವಿರುದ್ಧ ಈ ಪ್ರತಿಭಟನೆ ನಡೆಯಿತು.

 

 ಪ್ರತಿಭಟನೆಯ ಅಂತ್ಯದಲ್ಲಿ ಸಂಬಂಧಿತ ಅಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿತು.